Posts

Showing posts from April, 2021

ಶಾಲ್ಮಲೆ ನೀ ಗುಪ್ತಗಾಮಿನಿ!!!!

Image
     ಹೌದು!!   ಶಾಲ್ಮಲೆ ನೀ ಗುಪ್ತಗಾಮಿನಿ..ಆದೆ ನೀ ಗಂಗಾವಳಿ.. ---‐--‐---------------------‐---‐------------------  ಹುಟ್ಟಿದ್ದು ಧಾರವಾಡದ ಲಕ್ಕಮನಹಳ್ಳಿಯ ಅಗಸ್ತ್ಯ ತೀರ್ಥದ ಕಲ್ಯಾಣಿಯಲ್ಲಿ... ಕೂಗಳತೆಯಲ್ಲಿ ಕುಳಿತಹ ಸೋಮೇಶ್ವರ  ಜಕ್ಕಣಚಾರಿ ಕಡೆದ ಮಂದಿರದಲ್ಲಿ.. ಪಕ್ಕದಲ್ಲಿ  ಹರಿದೆ ಕಮಲದ  ಕೆರೆಯಾಗಿ ಒಳಗೊಳಗೆ ಹರಿದೆ  ಗುಪ್ತಗಾಮಿನಿಯಾಗಿ .. ನೀ  ಹುಟ್ಟಿದ ಸ್ಥಳ  ಬಟ್ಟೆ  ಒಗೆಯುವ ತಾಣ  ಕಬಳಿಸಿದ ನಿನ್ನ ಭೂಮಾಫಿಯಾದ ಜಾಣ.. ಬಿಟ್ಟರು  ನಿನ್ನೊಡಲಿಗೆ ಕೊಳಚೆ ನೀರನ್ನು  ಹೊಲಸು ಮಾಡಿದರು  ನಿನ್ನೊಡಲನ್ನು.. ದುಗುಡ ದುಮ್ಮಾನಗಳ ಉರಿಯೊಳಗೆ   ಹರಿದೆ  ಗುಪ್ತಗಾಮಿನಿಯಾಗಿ  ಒಳಗೊಳಗೆ .. ಕೊಡಿದೆ ನಿನ್ನ ಗೆಳತಿ   ಬೇಡ್ತಿಯ ಜೊತೆಗೆ  ಹುಡುಗಾಟ ಮಾಡುತ್ತಾ ಸಾಗಿದೆ ಕಲಘಟಗಿ ಯವರೆಗೆ ... ಅರವತ್ತು ಮೈಲಿ ಧಾರವಾಡದ ನಿನ್ನ ಪಯಣ ಶಾಂತವಾಗಿ ಒಳ್ಳಗೂಳಗೆ  ನಿನ್ನಯ ಯಾನ   ನಿನ್ನೆಯ ಪ್ರವೇಶ ಉತ್ತರ ಕನ್ನಡ ಜಿಲ್ಲೆಗೆ  ಬಾಲ್ಯ ಕಳೆದು ...

Tribute to Jagadishanna(My cousin brother)

Image
ಭಾವ ಪೂರ್ಣ ಶ್ರದ್ಧಾಂಜಲಿ -------‐------------------ ಅಣ್ಣಾ!! ಏಕಣ್ಣಾ ಬಾರದ ಲೋಕಕ್ಕೆ ನಿನ್ನಯ ಪಯಣ? ನಿನ್ನವರನ್ನು  ಬಿಟ್ಟು ಹೊರಟು ಬಿಟ್ಟೆ ಏಕಾಂಗಿಯಾಗಿ , (ಅಂಕೋಲಾ)ಶಿಳ್ಳೆಯ ಊರೇ ಖಾಲಿಯಾದ ಅನುಭವ,  ಅನಂತನ ಮನೆಯಲ್ಲಿ ಪಾದರಸ ದಂತೆ ಓಡಾಡುವ ನೀನು ಏಕಾಏಕಿ ಹೊರಟೇ ಬಿಟ್ಟೆಯಲ್ಲ .. ....ಏನು ಅವಸರವಿತ್ತು ನಿನಗೆ ಅಣ್ಣಾ? ಕಷ್ಟಕ್ಕೆ -ಸುಖಕ್ಕೆ ಜೊತೆ ಯಾದ  ನೀನು ಎಲ್ಲವನ್ನು  ತೊರೆದು  ನಮ್ಮನ್ನು  ಬಿಟ್ಟು ಹೊರಟು ಬಿಟ್ಟೆ ..ಏನು ಅವಸರವಿತ್ತು ನಿನಗೆ ಅಣ್ಣಾ !!! ನಿನ್ನ ಪವಿತ್ರವಾದ ಆತ್ಮ ಎಂದೆಂದಿಗೂ ಸದ್ಗತಿ ಯನ್ನು ಹೊಂದಲಿ ಎಂದು ಹಾರೈಸುವ ನಿನ್ನ  ಚಿಕ್ಕ ತಂಗಿ...ಮತ್ತೆ  ಹುಟ್ಟಿ  ಬಾ.. ಡಾ.ಮಂಗಲಾ ನಾಯಕ ಯರಗಟ್ಟಿ ಹಾಗೂ ಕುಟುಂಬ, ಧಾರವಾಡ.

IRON LADY OF ASSAM

Image
#IronLadyOfAssam #BraveIPSOfficer #InspirationToYoungGirls #WomenEmpowerment #FeelingProud👍👍👏👏 --------------------------------------------------------- Sanjukta Parashar is known as the Iron Lady of Assam. This female IPS Officer killed 16 millitants and arrested over 64 terrorists and seizing tons of arms and ammunition in just 15 months. A brave IPS Officer who is NIGHTMARE for millitants in Assam. She is an IPS Officer  of 2006 Batch.She was first posted as the Assistant Commandant of Makum in  2008.She was soon giving the responsibility of controlling  the clashes between Bodo and illegal Bangladeshi Millitants.  She completed  her graduation in Political Science  from IP College,Delhi University. She did her Masters in International Relations from JNU,New Delhi. She had completed MPhil  and persuing PHD in U S Foreign Policy As a Superitendent of Police in Sonitpur District, she had a team of CRPF jawans with AK-47 in the terror-infested regi...

Traditional Folk Dance: Suggi Kunita

Image
 "ಹೋಳಿ ಹುಣ್ಣಿಮೆ "ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ " ಅಂಕೋಲಾದ ಸುಗ್ಗಿ ಹಬ್ಬ " ---------‐----------‐------------------------------- ಉತ್ತರ ಕನ್ನಡ ಜಿಲ್ಲೆ ಸಾಂಪ್ರದಾಯಿಕ ಜಾನಪದ ಕಲೆಗಳಾದ ಯಕ್ಷಗಾನ ,ಬೇಡರವೇಷ ,ಸುಗ್ಗಿ ಕುಣಿತ ಮುಂತಾದವೂಗಳ  ತವರರೂರು.   ಹೋಳಿ ಹುಣ್ಣಿಮೆಯ  ಬಣ್ಣದ ಓಕುಲಿ ಹಬ್ಬವನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಶಿಷ್ಟ ವಾಗಿ "ಸುಗ್ಗಿ ಹಬ್ಬ "ವೆಂದು ಆಚರಿಸಲಾಗುತ್ತದೆ. ಜಿಲ್ಲೆಯ ಬುಡಕಟ್ಟು ಜನಾಂಗದ ಹಾಲಕ್ಕಿ ಒಕ್ಕಲಿಗರು ಸುಗ್ಗಿ ಹಬ್ಬ ವನ್ನು  ಭಕ್ತಿ -ಭಾವದಿಂದ ಐದು ದಿನ ಆಚಾರಿಸುತ್ತಾರೆ .  ಹಾಲಕ್ಕಿ ಒಕ್ಕಲಿಗರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಕಾರವಾರ, ಕುಮಟಾ, ಹೊನ್ನಾವರ ಜಿಲ್ಲೆಗಳಲ್ಲಿ  ವಿಶಿಷ್ಟವಾಗಿ ಕಂಡು ಬರುತ್ತಾರೆ. ಇವರ ಮೂಲ ಕಸಬು ಕೃಷಿ.  ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನಲ್ಲಿ  ಇಂದು ಕೃಷಿ ಜೀವಂತವಾಗಿದೆ ಎಂದರೆ ಅದಕ್ಕೆ "ಹಾಲಕ್ಕಿ ಒಕ್ಕಲಿಗರು " ಎಂದರೆ  ಅತಿಶಯೋಕ್ತಿ  ಆಗಲಾರದು .   ಅಂಕೋಲಾ ತಾಲ್ಲೂಕಿನ ಬೆಳಂಬಾರ,ಬಡಿಗೇರಿ,ಹಡವ,ಬೆಳಸೆ ಮುಂತಾದ ಊರುಗಳಲ್ಲಿ ನೆಲೆಸಿರುವ ಹಾಲಕ್ಕಿ ಒಕ್ಕಲಿಗರು ತರಕಾರಿ, ಹಣ್ಣು- ಹಂಪಲುಗಳನ್ನು  ಸಾಂಪ್ರದಾಯಿಕ ಶೈಲಿಯಲ್ಲಿ ಬೆಳೆದು ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಾರಾಟ ಮಾಡುತ್ತಾರೆ.    ...

Rural Godess of Nature

Image
 ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು  ಆಚರಣೆ ಮಾಡಿದ ಅಕ್ಷರಶಃ ಅಕ್ಷರ ಕಲಿಯದ ಹಾಲಕ್ಕಿ ಒಕ್ಕಲಿಗ ಮಹಿಳೆಯರು  ನಿಜವಾದ ಕನ್ನಡಿಗರು #ತುಳಸಿ ಗೌಡ #ಸುಕ್ರಿ ಗೌಡ #ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು #Inspring Rural Women . --------------------------------------     ಅಕ್ಷರ ಕಲಿಯದ ,ಬಡತನದ ಬೇಗೆಯನ್ನು  ಹೊತ್ತ ಈ  ಮಹಿಳೆಯರು ನಿಜವಾದ ಕನ್ನಡಿಗರು!! ನಮ್ಮ ಪರಿಸರ, ನಮ್ಮ ಭಾಷೆ ಹಾಗೂ ನಮ್ಮ  ಸಂಸ್ಕೃತಿಗಾಗಿ  ತಮ್ಮನ್ನು  ತಾವು ತೊಡಗಿಸಿಕೊಂಡು ಪ್ರಚಾರವನ್ನು ಬಯಸದೇ  ತಮ್ಮದೇ ದಾರಿಯಲ್ಲಿ ಬದುಕುತ್ತಿರುವ ನಿಜವಾದ ದೇಶ ಭಕ್ತರು . ಸಮಾಜಮುಖಿಯಾಗಿ ತಮ್ಮನ್ನು  ತಾವು ತೊಡಗಿಸಿಕೊಂಡಿರುವ ಇವರು ಹಾಲಕ್ಕಿ ಒಕ್ಕಲಿಗರು. ಈ ಸಮುದಾಯವು ಕರ್ನಾಟಕ ರಾಜ್ಯದ ಪ್ರಮುಖ ಬುಡಕಟ್ಟು ಜನಾಂಗಗಳಲ್ಲಿ ಒಂದು. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲ,ಕುಮಟಾ,ಹೊನ್ನಾವರ ತಾಲ್ಲೂಕುಗಳಲ್ಲಿ  ಇವರು ಹೆಚ್ಚಾಗಿ ಕಂಡುಬರುತ್ತಾರೆ. ಹಾಲಕ್ಕಿಗಳು ಕೃಷಿಯನ್ನು ಜೀವನಾಧಾರವಾಗಿರಿಸಿಕೊಂಡಿರುತ್ತಾರೆ. ಇವರು ಆದಿವಾಸಿ ಜೀವನ ಪದ್ಧತಿಯನ್ನು ಅನುಸರಿಸಿ ಪರಿಸರವನ್ನು ಉಳಿಸಿ -ಬೆಳೆಸುವಲ್ಲಿ ತಮ್ಮ ಅಮೂಲ್ಯವಾದ ಕೊಡಿಗೆಯನ್ನು ನೀಡಿರುತ್ತಾರೆ.     #ಸುಕ್ರಿಗೌಡ #ತುಳಸಿಗೌಡ !!   ಈ ಮಹಿ...