ಶಾಲ್ಮಲೆ ನೀ ಗುಪ್ತಗಾಮಿನಿ!!!!
ಹೌದು!!
ಶಾಲ್ಮಲೆ ನೀ ಗುಪ್ತಗಾಮಿನಿ..ಆದೆ ನೀ ಗಂಗಾವಳಿ..
---‐--‐---------------------‐---‐------------------
ಹುಟ್ಟಿದ್ದು ಧಾರವಾಡದ ಲಕ್ಕಮನಹಳ್ಳಿಯ ಅಗಸ್ತ್ಯ ತೀರ್ಥದ ಕಲ್ಯಾಣಿಯಲ್ಲಿ...
ಕೂಗಳತೆಯಲ್ಲಿ ಕುಳಿತಹ ಸೋಮೇಶ್ವರ
ಜಕ್ಕಣಚಾರಿ ಕಡೆದ ಮಂದಿರದಲ್ಲಿ..
ಪಕ್ಕದಲ್ಲಿ ಹರಿದೆ ಕಮಲದ ಕೆರೆಯಾಗಿ
ಒಳಗೊಳಗೆ ಹರಿದೆ ಗುಪ್ತಗಾಮಿನಿಯಾಗಿ ..
ನೀ ಹುಟ್ಟಿದ ಸ್ಥಳ ಬಟ್ಟೆ ಒಗೆಯುವ ತಾಣ
ಕಬಳಿಸಿದ ನಿನ್ನ ಭೂಮಾಫಿಯಾದ ಜಾಣ..
ಬಿಟ್ಟರು ನಿನ್ನೊಡಲಿಗೆ ಕೊಳಚೆ ನೀರನ್ನು
ಹೊಲಸು ಮಾಡಿದರು ನಿನ್ನೊಡಲನ್ನು..
ದುಗುಡ ದುಮ್ಮಾನಗಳ ಉರಿಯೊಳಗೆ
ಹರಿದೆ ಗುಪ್ತಗಾಮಿನಿಯಾಗಿ ಒಳಗೊಳಗೆ ..
ಕೊಡಿದೆ ನಿನ್ನ ಗೆಳತಿ ಬೇಡ್ತಿಯ ಜೊತೆಗೆ
ಹುಡುಗಾಟ ಮಾಡುತ್ತಾ ಸಾಗಿದೆ ಕಲಘಟಗಿ ಯವರೆಗೆ ...
ಅರವತ್ತು ಮೈಲಿ ಧಾರವಾಡದ ನಿನ್ನ ಪಯಣ ಶಾಂತವಾಗಿ ಒಳ್ಳಗೂಳಗೆ ನಿನ್ನಯ ಯಾನ
ನಿನ್ನೆಯ ಪ್ರವೇಶ ಉತ್ತರ ಕನ್ನಡ ಜಿಲ್ಲೆಗೆ
ಬಾಲ್ಯ ಕಳೆದು ಯೌವನದ ಮಡಿಲಿಗೆ..
ಪ್ರಕೃತಿಯರ ನಾಡಿಗೆ ....
ಯೌವನದ ಹರಯ ನಿನಗೆ..ಆಹಾ!!
ಏನೆಂದು ಬಣ್ಣಿಸಿಲಿ ನಿನ್ನ ...
ನಿನ್ನ ವಯ್ಯಾರ, ಭಿನ್ನ, ಬಿಂಕ ಭಿನ್ನಾಣ
ನಿನ್ನ ಸೌಂದರ್ಯಕ್ಕೆ ಮರಳಾಗದವರೆ ಇಲ್ಲ ..
ಹರೆಯದ ಹರುಷದ ಹೊನಲಲ್ಲಿ ..
ಗುಡ್ಡವ ಸೀಳಿದೆ, ಧುಮ್ಮಿಕಿ ಹರಿದೆ
ನಯನ ಮನೋಹರ ತಾಣವ ನೀಡಿದೆ..
ಶಾಂತವಾಗಿ ಸಹಸ್ರ ಲಿಂಗವವಾದೆ
ಧುಮ್ಮಿಕಿ ಶಿವಗಂಗೆಯಾದೆ
ದೂರದಿ ಕಾಣುವ ಮಾಗೋಡು...ಒಂದೊ..ಎರಡು..
ಪ್ರಕೃತಿಯಲ್ಲಿ ಸ್ವರ್ಗವನ್ನು ಕಟ್ಟಿ ಬಿಟ್ಟೆ.
ನೀ ಬೇಡ್ತಿ ಗಂಗಾವಳಿ ಆಗಿಬಿಟ್ಟೆ ..
ನಿನ್ನೊಡಲು ಅಪರೂಪದ ಸಸ್ಯ ಪ್ರಬೇಧಗಳ ತಾಣ
ನೀ ನೀಡಿದೆ ಸಹಸ್ರಾರು ವನ್ಯ ಜೀವಿಗಳಿಗೆ ಆಶ್ರಯ ತಾಣ
ನಿನ್ನ ಇಕ್ಕೆಲ ಪಕ್ಕೆಲಗಳಲ್ಲಿ ಬದುಕು ಕಟ್ಟಿಕೊಂಡ ವರೆಷ್ಟೋ ಲೆಕ್ಕವೇ ಇಲ್ಲ...
ಹರಿದೆ ಹರಿಯುತ್ತಲೇ ಇರುವೆ ನೀ ...
ಗೊತ್ತಿತ್ತು ನಿನಗೆ ನಿನ್ನ ಜೀವನದ ಗುರಿ
ಸೇರ ಬೇಕಿತ್ತು ನಿನ್ನ ಒಡೆಯನ ದಾರಿ.
ಬೀಳುತ್ತಲಿದೆ ನರಮಾನವನ ವಕ್ರ ದೃಷ್ಟಿ
ಹೊಂಚು ಹಾಕಿ ಕಾಯುತ್ತಲಿಹರು ನಿನ್ನ ಒಡಲ ಬಗೆಯುವ ದೂರದೃಷ್ಟಿ.
ಅಭಿವೃದ್ಧಿಯ ಹೆಸರಿನಲ್ಲಿ ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ, ಬೇಡ್ತಿ- ವರದಾ ನದಿ ಜೋಡಣೆ ..
ಪರಿಸರವಾದಿಗಳು ,ವಿಜ್ಞಾನಿಗಳು ನಿಂತರು ನಿನ್ನ ಬೆಂಬಲಕ್ಕೆ ಘೋಷಣೆ ಮಾಡಿದರು" ಶಾಲ್ಮ ಲಾ ನದಿ ಕಣಿವೆ ಪರಿಸರ ಸಂರಕ್ಷಣಾ ಪ್ರದೇಶ"
ಕೇಳಲಿಲ್ಲ ಹುಲು ಮಾನವರಿಗೆ ಅವರ ಕೂಗು ಕಬಳಿಸಲು ನಿನ್ನ ಹಾಕುತ್ತಿರುವರು ಹೊಂಚು ಹುನ್ನಾರ.
ಗೊತ್ತಿಲ್ಲ ಅವರಿಗೆ ನೀ ಮುನಿದರೆ ಮಾರಿ ಮುಳುಗಿಸುವೆ ಅವರನ್ನು ಎಂದು ಎಂದೆಂದಿಗೂ...
ಹರಿದೆ ನೀನು ಅಂಕೋಲೆಯಲ್ಲಿ ಗಂಗಾವಳಿ ಯಾಗಿ ,
ಈಚೆ ಅಂಕೋಲಾ ಆಚೆ ಕುಮಟಾ..ನೀ ಆದೆ ಗುಪ್ತಗಾಮಿನಿ ಗಂಗಾವಳಿ ..
ಪ್ರಬುದ್ಧ ಹರೆಯದ ಕನ್ಯೆಯಾಗಿ
ವರ್ಣಿಸಲು ಅಸಾಧ್ಯ ನಿನ್ನ ಚೆಲುವನು
ಹೆಚ್ಚಿಸಿದೆ ಅಂಕೋಲೆ-ಕುಮಟೆಯ ಸೃಷ್ಟಿ ಸೌಂದರ್ಯವನು
ಹಸಿರು ಹೊದಿಕೆ, ತೆಂಗು-ಕಂಗು,ಬಾಳೆ ಫಸಲು- ಪೈರು
ಮದುವಣಗಿತ್ತಿಯ ನಿನ್ನ ಶೃಂಗಾರ
ಪದಗಳೇ ಸಿಗುತ್ತಿಲ್ಲ ನಿನ್ನ ಬಣ್ಣಿಸಲು
ನೀ ಗುಪ್ತಗಾಮಿನಿ ಗಂಗಾವಳಿಯ ಗಂಗೆಯಾದೆ
ಹೊರಟೆ ನೀ ಗೋಕರ್ಣಕ್ಕೆ ವರಿಸಲು ನಿನ್ನೊಡೆ ಯ ಮಹಾಬಲೇಶ್ವರನ ಸನ್ನಿಧಿಗೆ
ಆಹಾ! ಶಿವ- ಗಂಗೆ ಕಲ್ಯಾಣ..ಶಿವ- ಗಂಗೆ ಕಲ್ಯಾಣ...
ಆತುರ ಕಾತುರದಿ ಹರಿದೆ ಸವಿಸ್ತಾರವಾಗಿ
ನಯವಾಗಿ ತಬ್ಬಿದೆ ಲೀನವಾದೆ ಅರಬ್ಬೀ ಸಮುದ್ರದಲ್ಲಿ...ಮಂಜಗುಣಿಯ ತಟದಲ್ಲಿ !!!!!!
(ಸ್ವಗತ )
ನಾ ಈ ಪ್ರಕೃತಿಯ ಸೃಷ್ಟಿ, ಸರಿ ಸಮಾನವಾಗಿ ಸಲ್ಲಿರುವೆ ಎಲ್ಲ ಬಗೆಯ ಜೀವಿಗಳಿಗೆ ಆದರೆ ಯಾವ ಜೀವಿಗಳೂ ನಿನ್ನಷ್ಟು ಕ್ರೂರಿಯಲ್ಲ
ಬಿಟ್ಟು ಬಿಡು ಮನುಜ ನಿನ್ನ ದುರಾಸೆಯ
ನೀರಿಗಾಗಿ ಹುಡುಕಿ ನನ್ನ ತಟಕ್ಕೆ ಬಂದವ ನೀನು...ವಿಕಾರಗೊಳಿಸ ಬೇಡ ನನ್ನ ವಿಕಾರ ಗೊಳಿಸಿದರೆ ನಿನ್ನ ಅವನತಿ ನಿಶ್ಚಿತ
ಎಚ್ಚರ ಎಚ್ಚರ ಎಚ್ಚರ!!!!
Comments
Post a Comment