Rural Godess of Nature

 ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು  ಆಚರಣೆ ಮಾಡಿದ ಅಕ್ಷರಶಃ ಅಕ್ಷರ ಕಲಿಯದ ಹಾಲಕ್ಕಿ ಒಕ್ಕಲಿಗ ಮಹಿಳೆಯರು  ನಿಜವಾದ ಕನ್ನಡಿಗರು #ತುಳಸಿ ಗೌಡ #ಸುಕ್ರಿ ಗೌಡ #ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು #Inspring Rural Women .

--------------------------------------

    ಅಕ್ಷರ ಕಲಿಯದ ,ಬಡತನದ ಬೇಗೆಯನ್ನು  ಹೊತ್ತ ಈ  ಮಹಿಳೆಯರು ನಿಜವಾದ ಕನ್ನಡಿಗರು!! ನಮ್ಮ ಪರಿಸರ, ನಮ್ಮ ಭಾಷೆ ಹಾಗೂ ನಮ್ಮ  ಸಂಸ್ಕೃತಿಗಾಗಿ  ತಮ್ಮನ್ನು  ತಾವು ತೊಡಗಿಸಿಕೊಂಡು ಪ್ರಚಾರವನ್ನು ಬಯಸದೇ  ತಮ್ಮದೇ ದಾರಿಯಲ್ಲಿ ಬದುಕುತ್ತಿರುವ ನಿಜವಾದ ದೇಶ ಭಕ್ತರು .

ಸಮಾಜಮುಖಿಯಾಗಿ ತಮ್ಮನ್ನು  ತಾವು ತೊಡಗಿಸಿಕೊಂಡಿರುವ ಇವರು ಹಾಲಕ್ಕಿ ಒಕ್ಕಲಿಗರು. ಈ ಸಮುದಾಯವು ಕರ್ನಾಟಕ ರಾಜ್ಯದ ಪ್ರಮುಖ ಬುಡಕಟ್ಟು ಜನಾಂಗಗಳಲ್ಲಿ ಒಂದು. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲ,ಕುಮಟಾ,ಹೊನ್ನಾವರ ತಾಲ್ಲೂಕುಗಳಲ್ಲಿ  ಇವರು ಹೆಚ್ಚಾಗಿ ಕಂಡುಬರುತ್ತಾರೆ. ಹಾಲಕ್ಕಿಗಳು ಕೃಷಿಯನ್ನು ಜೀವನಾಧಾರವಾಗಿರಿಸಿಕೊಂಡಿರುತ್ತಾರೆ. ಇವರು ಆದಿವಾಸಿ ಜೀವನ ಪದ್ಧತಿಯನ್ನು ಅನುಸರಿಸಿ ಪರಿಸರವನ್ನು ಉಳಿಸಿ -ಬೆಳೆಸುವಲ್ಲಿ ತಮ್ಮ ಅಮೂಲ್ಯವಾದ ಕೊಡಿಗೆಯನ್ನು ನೀಡಿರುತ್ತಾರೆ. 

   #ಸುಕ್ರಿಗೌಡ #ತುಳಸಿಗೌಡ !!

  ಈ ಮಹಿಳೆಯರು ಸಾಮಾ ನ್ಯರಲ್ಲ  ದೇಶದ ನಾಲ್ಕನೇ ಅತ್ತ್ಯುತ್ತಮ ನಾಗರಿಕ  ಪ್ರಶಸ್ತಿಯಾದ "ಪದ್ಮಶ್ರೀ ಪ್ರಶಸ್ತಿ "ಪುರಸ್ಕೃತರು .

    ಸುಕ್ರಿ ಬೊಮ್ಮ ಗೌಡ ಮೂಲತಃ ಅಂಕೋಲಾ ತಾಲ್ಲೂಕಿನ ಬಡಿಗೇರಿಯವರು .  ಜಾನಪದ ಸಂಗೀತ ಸಾಧಕಿಯಾದ  ಇವರು ಅಕ್ಷರ  ಕಲಿಯದೇ 5000 ಕ್ಕಿಂತಲೂ ಅಧಿಕ ಹಾಡುಗಳನ್ನು ಕಟ್ಟಿ  ಹಾಗೂ ಹಾಡಿ ಸಮಾಜ ಪರಿವರ್ತಿಸುವಲ್ಲಿ ಯಶಸ್ವಿಯಾದವರು  ಸುಕ್ರಿ  ಬೊಮ್ಮ ಗೌಡ ಜಾನಪದ ಸಂಗೀತ ಸಾಧಕಿ. ಮೂಲತಹ   ಉತ್ತರ ಕನ್ನಡ ಜಿಲ್ಲೆಯ    ಅಂಕೋಲಾ ತಾಲ್ಲೂಕಿನ ಬಡಗೇರಿಯವರಾದ ಇವರು ಸುಕ್ರಜ್ಜಿಯೆಂದೇ ಖ್ಯಾತರು. ೮೦ ವರ್ಷ ವಯಸ್ಸಿನ ಸುಕ್ರಜ್ಜಿಯು ಜಾನಪದ ಹಾಲಕ್ಕಿ ಹಾಡನ್ನು ಹಾಡುವಲ್ಲಿ ಪ್ರಸಿದ್ಧಿಗೊಂಡವರು. ಸುಕ್ರಜ್ಜಿಯ ನೆನಪಿನಲ್ಲಿ ಸುಮಾರು ೫೦೦೦ ಹಾಲಕ್ಕಿ ಹಾಡುಗಳಿವೆ ಮತ್ತು ಅದರಲ್ಲಿ ಹಲವು ನೂರು ವರ್ಷಕ್ಕಿಂತಲೂ ಹಳೆಯದಾಗಿದೆ. ಸಾವಿರಾರು ಹಾಲಕ್ಕಿ ಹಾಡುಗಳನ್ನು ಹೇಳುವ ಇವರು ಹಾಲಕ್ಕಿ ಹಾಡುಗಳ ಕೋಗಿಲೆ ಎಂದು ಪ್ರಖ್ಯಾತಗೊಂಡಿದ್ದಾರೆ.  ಕರ್ನಾಟಕ ಜಾನಪದ ಅಕಾಡೆಮಿ   ಸುಕ್ರಜ್ಜಿಯವರ ಹಾಡುಗಳನ್ನು ಪುಸ್ತಕ ರೂಪದಲ್ಲಿ ಸಂಗ್ರಹಿಸಿಟ್ಟಿದೆ. ಅಲ್ಲದೇ ಕಾರವಾರದಲ್ಲಿನ ಅಖಿಲ ಭಾರತ ರೇಡಿಯೋ ಕೂಡಾ ಅವರ ಹಾಡುಗಳನ್ನು ಧ್ವನಿಮುದ್ರಣ ಮಾಡಿದೆ ಮತ್ತು ಅವುಗಳನ್ನು ಅದರ ಗ್ರಂಥಾಲಯದಲ್ಲಿ ಸಂರಕ್ಷಿಸಲಾಗಿದೆ.

     ತುಳಸಿ ಗೌಡ ಅಂಕೋಲೆಯ ಹೊನ್ನಾಳಿಯ ವರು ,ಪರಿಸರವಾದಿ ,30,000 ಕ್ಕೂ ಅಧಿಕ ವನ್ಯ ಸಸಿಗಳನ್ನು ಪಾಲಿಸಿ ಪೋಷಿಸಿದವರು .ಇವ  ರನ್ನು "ವೃಕ್ಷ ಮಾತೆ "ಎಂದು  ಕರೆಯುತ್ತಾರೆ.  300  ಕ್ಕಿಂತಲೂ  ಹೆಚ್ಚು ಸಸ್ಯ  ಪ್ರಬೇಧಗಳ ಬಗ್ಗೆ ಇರುವ ಇವರ ಜ್ಞಾನವು ತುಂಬಾ ಅಗಾಧವಾದದ್ದೇ, ಹೀಗಾಗಿ  ಇವರನ್ನು"Encyclopedia of forest herbs" ಎಂದು ಕರೆಯುತ್ತಾರೆ. 

ಪರಿಸರ ಪ್ರೇಮ ಅನ್ನುವುದು ಇವರಿಗೆ ಹುಟ್ಟಿನಿಂದ ಬಂದಿತ್ತು. ಊರಿನವರ ಜೊತೆ ಕಾಡಿಗೆ  ಹೋಗಿ ಕಟ್ಟಿಗೆ ತರುವ ಕೆಲಸವನ್ನ ಮಾಡಿ ಪ್ರತಿನಿತ್ಯ ಐದರಿಂದ ಆರು ರೂಪಾಯಿ ದುಡಿಯುತ್ತಿದ್ದ ತುಳಸಿಗೆ ಅರಣ್ಯ ಇಲಾಖೆ  ಗಳನ್ನು ಮರಗಳ  ಬೀಜಗಳನ್ನು  ಸಂಗ್ರಹಿಸಿ  ಸಸಿಗಳನ್ನಾಗಿ ಮಾಡಿಕೊಡುವ ಕೆಲಸವನ್ನೂ ಮಾಡುತಿದ್ದರು. ಪರಿಸರದ ಮೇಲೆ ಕಾಳಜಿ ಇದ್ದುದರಿಂದ ಬೀಜಗಳನ್ನು ತಂದು ಸಸಿ  ಮಾಡಿ  ಕೊಡಲು ಪ್ರಾರಂಭಿಸಿದರು . ಇದು  ಕೂಲಿ ಕೆಲಸ  ಒಂದು  ಸಸಿಗೆ ಒಂದು ರೂಪಾಯಿ ಇಪ್ಪತ್ತೈದು ಪೈಸೆ   ಕೊಡುತ್ತಿದ್ದರು . ಕಡಿಮೆ ಕೂಲಿಗೆ ಸಸಿ ಮಾಡುವ ಕೆಲಸ ಬೇಡ ಎಂದು ಎಲ್ಲರೂ ಹೇಳಿದರೂ ಕೇಳದ ಅವರು  ಪರಿಸರದ ಬಗ್ಗೆ  ಇರುವ  ಅಪಾರ ಕಾಳಜಯಿಂ ದ ಅವರು  ಆ  ಕೆಲಸವನ್ನು  ನಿಲ್ಲಿಸಲ್ಲಿಲ.

 ಇವರು  ಎಳ್ಳು, ನಂದಿ, ಪೀಪುಲ್, ಫಿಕಸ್, ಬಿದಿರು, ರಾಟನ್, ಜಮುನ್, ಗೋಡಂಬಿ, ಜಾಯಿಕಾಯಿ, ಮಾವು, ಹಲಸು, ಕೊಕುಮ್‌ನಂತಹ ಹಣ್ಣಿನ ಮರಗಳನ್ನು ಬೆಳೆಸಿದ್ದೇವೆ  ಎಂದು ತುಳಸಿ ಗೌಡ ಹೇಳುತ್ತಾರೆ.  ಇವರು ಜನರಿಗೆ ತುಳಸಜ್ಜಿ ಎಂದೇ ಜನಪ್ರಿಯ. ಇಂದಿನ ಯುವಜನಾಂಗದವರು ಅವರ ಬಳಿ ಹೋಗಿ ಗಿಡ, ಬಳ್ಳಿ, ಬೀಜಗಳ ಬಗ್ಗೆ ಮಾಹಿತಿ ಪಡೆಯುತ್ತಾರೆ, ಹೇಗೆ ನೆಟ್ಟು ಬೆಳೆಸಬೇಕೆಂದು ಸಲಹೆ ಪಡೆಯುತ್ತಾರೆ. ಜನರು ಪ್ರೀತಿಯಿಂದ 'ವೃಕ್ಷ ದೇವಿ' ಎಂದು ಕರೆಯುತ್ತಾರೆ.

  ಶೇಕಡಾ 90 ಕ್ಕಿಂತಲೂ ಅಧಿಕ ಸಾಕ್ಷರತೆ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯ ಅನಕ್ಷರ ಸ್ಥ ಮಹಿಳೆಯರ ಯಶೋಗಾತೆ ನಿಜಕ್ಕೂ ಶ್ಲಾಘನೀಯ!!  

Comments

Popular posts from this blog

ನನ್ನ ಅವ್ವ 💕