ಕರುಣಾಳು ಬಾ ಬೆಳಕೆ..ಅಂಕೋಲೆಯ ಶಿಕ್ಷಣ ದಾನಿ ಸ.ಪ.ಗಾಂವಕರ 🙏🙏
#ಉತ್ತರಕನ್ನಡಜಿಲ್ಲೆ #ಮಹಾನ್ ಚೇತನ #ಸ.ಪ.ಗಾವಂಕರ #ಶತಮಾನೋತ್ಸವ #ನಾಡವರಸಂಘ #ಕರ್ನಾಟಕದಬಾರ್ಡೋಲಿ #ನಮ್ಮಹೆಮ್ಮೆ #Congratulations 🙏🙏🌹🌹🌹 ಇಂದು ಉತ್ತರ ಕನ್ನಡ ಜಿಲ್ಲೆಯ ಸಾಮಾಜಿಕ ವಾಗಿ ಹಾಗೂ ಶೈಕ್ಷಣಿಕವಾಗಿ ಮುಂದುವರೆದಿದೆ ಎಂದರೆ ಅದಕ್ಕೆ ಅನೇಕ ಮಹನೀಯರ ತ್ಯಾಗ ಹಾಗೂ ಬಲಿದಾನವೇ ಕಾರಣ. ಅಂತಹ ಮಹನೀಯರ ಪಟ್ಟಿಯಲ್ಲಿ ದಿನಕರ ದೇಸಾಯಿಯವರ ಜೊತೆಗೆ ಸರಿಸಮನಾದ ನಿಲ್ಲುವ ಹಳೆಯ ತಲೆಮಾರಿನ ಇನ್ನೊಂದು ಹೆಸರು "ಸಣ್ಣಪ್ಪ ಪರಮೇಶ್ವರ ಗಾವಂಕರ". ಅಂತಹ ಮೇರು ವ್ಯಕ್ತಿತ್ವವನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯ ಮಾಡಿಕೊಡುವದು ನಮ್ಮೆಲ್ಲರ ಕರ್ತವ್ಯವೂ ಹೌದು. ------------------------------------------------------------ ಸಣ್ಣಪ್ಪ ಪರಮೇಶ್ವರ ಗಾಂವಕರ , 11 ಜನವರಿ 1885 ರಂದು ಕುಮಟಾ ತಾಲ್ಲೂಕಿನ ಪುಟ್ಟ ಗ್ರಾಮ ತೊರ್ಕೆಯಲ್ಲಿ ಜನಿಸಿದರು. ಅವರು ಅದೇ ತಾಲ್ಲೂಕಿನ ತದಡಿಯಲ್ಲಿರುವ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ತಮ್ಮ 40 ನೇ ವಯಸ್ಸಿನಲ್ಲಿ (1925), ಗಾಂವಕರರು ಸಾಂಗ್ಲಿಯ ವಿಲ್ಲಿಂಗ್ಡನ್ ಕಾಲೇಜಿನಿಂದ ಬಿ. ಎ ಪದವಿಯನ್ನು ಪಡೆದರು. ಅವರು ಹುಬ್ಬಳ್ಳಿ ಪುರಸಭೆಯಲ್ಲಿ ಅಧಿಕಾರಿಯಾಗಿದ್ದರು. 1942 ರಲ್ಲಿ ತಮ್ಮ ನಿವೃತ್ತಿಯ ನಂತರ, ಸ.ಪ. ಗಾಂವಕರರು ಅವರು "ಕ್ವಿಟ್ ಇಂಡಿಯಾ ಚಳುವಳಿ "ಯಲ್ಲಿ ಭಾಗವಹಿಸಿದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ...
Comments
Post a Comment