ನನ್ನಪ್ಪ ಶೀಳ್ಯಯ ಬೊಮ್ಮಯ್ಯ ಮಾಸ್ತರ..
"ಅಪ್ಪ" ಎನ್ನುವ ಪದವೇ ಅದ್ಭುತ .ಸಂಸಾರದ ನೊಗ ಹೊತ್ತು ಗಾಣದ ಎತ್ತಿನಂತೆ ದುಡಿದ ಸ್ವಾಭಿಮಾನಿ ನನ್ನಪ್ಪ 5-03-2022ರಂದು ನಮ್ಮೆಲ್ಲರನ್ನು ಬಿಟ್ಟು ತನ್ನ 96ನೆಯ ವಯಸ್ಸಿಗೆ ಇಹಲೋಕ ಯಾತ್ರೆ ಕೈಗೊಂಡಿದ್ದು ತುಂಬಾ ದುಃಖದ ವಿಷಯ.
ಶೀಳ್ಯಯ ಬೊಮ್ಮಯ್ಯ ಮಾಸ್ತರರು ಇನ್ನಿಲ್ಲ...
ಬೊಮ್ಮಯ್ಯ ಮಾಸ್ತರ ಹುಟ್ಟಿದ್ದು ಜೂನ 21,1936ರಲ್ಲಿ ಶೀಳ್ಯಯ ರಾಮ ಅನಂತ ನಾಯಕ ಹಾಗೂ ಹೊನ್ನಮ್ಮ ನಾಯಕ ದಂಪತಿಯರ ಎರಡನೆಯ ಮಗನಾಗಿ.
ಆಗ ನಮ್ಮ ಭಾರತ ಬ್ರಿಟಿಷರ ದಬ್ಬಾಳಿಕೆಯಲ್ಲಿ ನಲುಗುತ್ತಿತ್ತು.ಬ್ರಿಟಿಷರು ಕಂಡ ಕಂಡ ಭಾರತೀಯ ಹುಡುಗರನ್ನು ಜೈಲೊಳಗೆ ತುಂಬುವ ಕಾಲ, ಅಂತಹ ಸಂದರ್ಭದಲ್ಲಿ ನಾಡವರ ಸಮುದಾಯದ ಮಹಾನ್ ಚೇತನ ಸ.ಪ.ಗಾಂವಕರರು ನಾಡವರ ಹುಡುಗರನ್ನು ಬ್ರಿಟಿಷರಿಂದ ತಪ್ಪಿಸುವ ಸಲುವಾಗಿ ಬನಾರಸ ವಿಶ್ವವಿದ್ಯಾಲಯಕ್ಕೆ ಕಳುಹಿಸಲು ತಯಾರಿ ನಡೆಸಿ ಉತ್ತರ ಭಾರತದ ರೈಲನ್ನು ಹತ್ತಿಸಿ ಬಿಡುತ್ತಾರೆ.ಅಂತಹ ಐದು ಜನ ಹುಡುಗರಲ್ಲಿ ಬೊಮ್ಮಯ್ಯ ಮಾಸ್ತರರು ಒಬ್ಬರು.
ಉತ್ತರ ಭಾರತದ ಅಯ್ಯೋಧೆಯ ಕಾಶಿ ವಿದ್ಯಾಪೀಠದ ಗುರುಕುಲದಲ್ಲಿ ಸತತ ಆರು ವರ್ಷ ಸಂಸ್ಕೃತ ಅಧ್ಯಯನ ನಡೆಸಿ, ಸಂಸ್ಕೃತದಲ್ಲಿ ಪಾಂಡಿತ್ಯವನ್ನು ಹೆಚ್ಚಿಸಿಕೊಂಡು, ಅಲ್ಲಿನ ಸಂಸ್ಕಾರಕಗಳನ್ನು ಪಾಲಿಸಿ,ಸತ್ಯ,ನಿಷ್ಠೆಗೆ "ಬೊಮ್ಮಯ್ಯ " "ಸತ್ಯೇಂದ್ರ" ನಾಗಿ ಮರುನಾಮಕರಣಗೂಂಡು,ಸತ್ಯೇಂದ್ರ ರಾಮ ನಾಯಕ ಆಗುತ್ತಾರೆ.ಅಯ್ಯೋಧೆಯ ಕಾಶಿ ವಿದ್ಯಾಪೀಠದಲ್ಲಿ ಹಿಂದಿ ಅಧ್ಯಯನ ನಡೆಸಿದ ಅವರು ಹಿಂದಿಯಲ್ಲಿ ಇರುವ ಮಹತ್ತರ ಬಿರುದಾಂಕಿತಗಳಾದ ರತ್ನ, ಭೂಷಣ, ವಿಶಾರದ ಮುಂತಾದವುಗಳನ್ನು ಮದ್ರಾಸ್ ವಿಶ್ವವಿದ್ಯಾಲಯದ ಹಿಂದಿ ಪ್ರಚಾರ ಸಭಾದಿಂದ ಪಡೆದಿದ್ದರು.
ಮುಂದೆ1961ರಲ್ಲಿ ಸತ್ಯಾಗ್ರಹ ಸ್ಮಾರಕ ವಿಶ್ವವಿದ್ಯಾಲಯದ ಶೇಟಗೇರಿಯಲ್ಲಿ ಶಿಕ್ಷಕರಾಗಿ 1982ರವರೆಗೆ ಸೇವೆ ಸಲ್ಲಿಸಿದ ಬೊಮ್ಮಯ್ಯ ಮಾಸ್ತರರು ಅಪಾರ ಶಿಷ್ಯ ವೃಂದವನ್ನು ಹೊಂದಿದ್ದರು.ಹುಟ್ಟು ಕೃಷಿಕರಾಗಿದ್ದ ಅವರು ತಮ್ಮ ಸೇವಾ ನಿವೃತ್ತಿಯ ನಂತರ ತಮ್ಮನ್ನು ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಸಿಕೊಂಡು ಸಾವಯವ ಕೃಷಿಯಲ್ಲಿ ನಾನಾ ಪ್ರಯೋಗಗಳನ್ನು ನಡೆಸಿದ್ದರು.ಯಾವಾಗಲೂ ಶಿಸ್ತಿನ ಸಿಪಾಯಿಯಾಗದ್ದ ಅವರು, ತಮ್ಮ ಏಳೂ ಮಕ್ಕಳನ್ನು ಶಿಕ್ಷಕರನ್ನಾಗಿಸಿ ಕೀರ್ತಿ ಅವರಿಗೆ ಸಲ್ಲುತ್ತದೆ.
ಎಲೆಮರೆಯ ಕಾಯಿಯಂತೇ ಬದುಕಿ ,ಯಾವುದೇ ಪ್ರಚಾರ ಬಯಸದೇ,ಸಮಾಜಕ್ಕೆ ತಮ್ಮಿಂದಾದ ಸಹಾಯವನ್ನು ನೀಡಿ, 96 ವರ್ಷಗಳ ಸುದೀರ್ಘ ಜೀವನ ನಡೆಸಿದ್ದ ಬೊಮ್ಮಯ್ಯ ಮಾಸ್ತರರು ತಾರೀಖ 5-3-2022 ರಂದು ನಮ್ಮನ್ನು ಆಗಲಿರುವದು ದುಃಖದ ಸಂಗತಿಯಾಗಿದೆ.
ಭಗವಂತ ಶ್ರೀಯುತರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಹಾಗೂ ಅವರ ಧರ್ಮ ಪತ್ನಿಗೆ ದುಃಖ ಭರಿಸುವ ಶಕ್ತಿ ನೀಡಲಿ🙏
Comments
Post a Comment