Posts

Image
"ಹೋಳಿ ಹುಣ್ಣಿಮೆ "ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ " ಅಂಕೋಲಾದ ಸುಗ್ಗಿ ಹಬ್ಬ "🥳🥳🥳🌹🌹🌹🌹🍀☘🌲🌳 ವಿಡಿಯೋದ ವಿಶೇಷತೆ: ಬೆಳ್ಳಿಯ ಕುಚ್ಚ ಮತ್ತು ಬೆಳ್ಳಿಯ ಕಿರೀಟ, ಬೆಳಸೆ ಸುಗ್ಗಿ ಅಂಕೋಲಾ ----------‐------‐----------‐------------------------------- ಉತ್ತರ ಕನ್ನಡ ಜಿಲ್ಲೆ ಸಾಂಪ್ರದಾಯಿಕ ಜಾನಪದ ಕಲೆಗಳಾದ ಯಕ್ಷಗಾನ ,ಬೇಡರವೇಷ ,ಸುಗ್ಗಿ ಕುಣಿತ ಮುಂತಾದವೂಗಳ ತವರರೂರು.   ಹೋಳಿ ಹುಣ್ಣಿಮೆಯ ಬಣ್ಣದ ಓಕುಲಿ ಹಬ್ಬವನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಶಿಷ್ಟ ವಾಗಿ "ಸುಗ್ಗಿ ಹಬ್ಬ "ವೆಂದು ಆಚರಿಸಲಾಗುತ್ತದೆ. ಜಿಲ್ಲೆಯ ಬುಡಕಟ್ಟು ಜನಾಂಗದ ಹಾಲಕ್ಕಿ ಒಕ್ಕಲಿಗರು ಸುಗ್ಗಿ ಹಬ್ಬ ವನ್ನು ಭಕ್ತಿ -ಭಾವದಿಂದ ಐದು ದಿನ ಆಚಾರಿಸುತ್ತಾರೆ .  ಹಾಲಕ್ಕಿ ಒಕ್ಕಲಿಗರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಕಾರವಾರ, ಕುಮಟಾ, ಹೊನ್ನಾವರ ಜಿಲ್ಲೆಗಳಲ್ಲಿ ವಿಶಿಷ್ಟವಾಗಿ ಕಂಡು ಬರುತ್ತಾರೆ. ಇವರ ಮೂಲ ಕಸಬು ಕೃಷಿ.  ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನಲ್ಲಿ ಇಂದು ಕೃಷಿ ಜೀವಂತವಾಗಿದೆ ಎಂದರೆ ಅದಕ್ಕೆ "ಹಾಲಕ್ಕಿ ಒಕ್ಕಲಿಗರು " ಎಂದರೆ ಅತಿಶಯೋಕ್ತಿ ಆಗಲಾರದು .   ಅಂಕೋಲಾ ತಾಲ್ಲೂಕಿನ ಬೆಳಂಬಾರ,ಬಡಿಗೇರಿ,ಹಡವ,ಬೆಳಸೆ ಮುಂತಾದ ಊರುಗಳಲ್ಲಿ ನೆಲೆಸಿರುವ ಹಾಲಕ್ಕಿ ಒಕ್ಕಲಿಗರು ತರಕಾರಿ, ಹಣ್ಣು- ಹಂಪಲುಗಳನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಬೆಳೆದು ಜಿಲ್ಲೆಯ ವಿವಿಧ ಭಾಗಗಳಲ...

ನನ್ನ ಅವ್ವ 💕

Image
  *ಅವ್ವ 🥰* ಮಮತೆಯ ಮಡಿಲಲಿ ಬೆಚ್ಚನೆ ಮಲಗಿಸಿ ಅಮೃತವ ಉಣಿಸಿದೆ ನೀನು.. ಹಣೆ ನೇವರಿಸಿ ಸಾಂತ್ವನ ಹೇಳುತ ಮುತ್ತನು ನೀಡಿದೆ ನೀನು.. ಎನ್ನಯ ಮೊದಲ ಪ್ರತಿ-ಹೆಜ್ಜೆಗಳಲ್ಲಿ ಕಣ್ಣಾಗಿರುವೆ ನೀನು.. ಎನ್ನಯ ತೊದಲಿಗೆ ಅರ್ಥವ ನೀಡುವ  ಮಾತಾಗಿರುವೆ ನೀನು.. ಅವ್ವ ನಿನ್ನಯ ಸೆರಗಿನ ಋಣವ  ಹೇಗೆ ತೀರಿಸಲಿ ನಾನು.. ಗುಮ್ಮನ ಓಡಿಸಿ ಎನ್ನಯ ಮನದಲಿ ಧೈರ್ಯವ ತುಂಬಿದೆ ನೀನು.. ಎನ್ನಯ ಸೋಲಲಿ ನೆರಳಾಗಿದ್ದು ಸರಿ- ದಾರಿಯ ತೋರಿದೆ ನೀನು.. ನಿನ್ನಯ ಖುಷಿಯನು ಎನ್ನಲಿ ಕಂಡು ಸಹನೆಯ ಸಾರಿದೆ ನೀನು.. ಕರುಣೆಯ ಕಡಲಲಿ ತೇಲುತ ಸಾಗುವ ನಿರ್ಭಯ ನೌಕೆಯು ನಾನು.. ಕಾಡುವ ಕಷ್ಟವ ಮೀರುತ ಸಾಗುವ ಭರವಸೆಯ-ಹುಟ್ಟು ನೀನು.. ಅವ್ವ ಎನ್ನುವ ಎರಡಕ್ಷರದಲೆ ಇದೆ ಎಲ್ಲಿಲ್ಲದ ಸ್ಫೂರ್ತಿ.. ನಿನ್ನಯ ನೆನಪೆ ನನಗದು ಕಲ್ಪತರು... ಮರೆಯಲಾಗದ ನೋವು... Missing you ಅವ್ವ ❤️❤️

ಸಾಣಿಕಟ್ಟೆಯ ಉಪ್ಪಿನಾಗರ

Image
ಸಾಂಪ್ರದಾಯಿಕಉಪ್ಪಿನತಯಾರಿಕೆ #ವರ್ಷ302 #ಐತಿಹಾಸಿಕಹಿನ್ನಲೆ #ಉತ್ತರಕನ್ನಡಜಿಲ್ಲೆಯಹೆಮ್ಮೆ ಉತ್ತರ ಕನ್ನಡ ಜಿಲ್ಲೆಯ ಕೆಂಪುಪ್ಪಿನ ಆಗರ  ಸಾಣಿಕಟ್ಟಾ (ಕುಮಟಾ), ಹಡವ(ಅಂಕೋಲ) ಮತ್ತು ಶಿಂಗನಮಕ್ಕಿ (ಅಂಕೋಲ).. ಗೋಕರ್ಣಕ್ಕೆ ಹೋಗುವ ಪ್ರವಾಸಿಗರಿಗೆ ,ಇನ್ನೇನು ಗೋಕರ್ಣ ಮುಟ್ಟ ಬೇಕೆನಿಸುವಷ್ಟರಲ್ಲಿ ,ರಾಷ್ಟ್ರೀಯ ಹೆದ್ದಾರಿಯಿಂದ ಹೊರಳಿ, ಗೋಕರ್ಣದತ್ತ ಸಾಗುವಾಗ ಎಡಬಲದಲ್ಲಿ ಕಾಣಸಿಗುವ ಎಕರೆಗಟ್ಟಲೇ ಗಜನಿ ಭೂಮಿಯ ಮೇಲೆ ಹಿಮದ ರಾಶಿಯಂತೆ ಅಲ್ಲಲ್ಲಿ ಚೆಲ್ಲಿ ಬಿದ್ದಿರುವ ಪುಟ್ಟ ಪುಟ್ಟ ಬಿಳಿಯ ಗುಪ್ಪೆಗಳು ಇದಿರುಗೂಂಡು ಸ್ವಾಗತಿಸುವದೇ ನಮ್ಮ "ಸಾಣಿಕಟ್ಟೆಯ ಉಪ್ಪಿನಾಗರ " ----------‐------------------------------------------------- ಇದು ಗೋಕರ್ಣದ ನೆಲದ ಮತ್ತೊಂದು ವಿಶೇಷ ಹಾಗೂ ಇಲ್ಲಿನ ಜನರು ಕಷ್ಟಪಟ್ಟು ಸುರಿಸಿದ ಬೆವರಿನ ಫಸಲು. ಗೋಕರ್ಣಕ್ಕೆ ಹೊಂದಿಕೊಂಡಂತೆ ಇರುವ ಸಾಣಿಕಟ್ಟಾ, ಕರ್ನಾಟಕದ ಅತ್ಯಂತ ಹಳೆಯ ಮತ್ತು ದೊಡ್ಡ ಉಪ್ಪಿನ ಕಾರ್ಖಾನೆ .  1720ರಿಂದ ನಿರಂತರವಾಗಿ ಬೇಸಿಗೆಕಾಲದಲ್ಲಿ ಉಪ್ಪನ್ನು ತಯಾರಿಸುತ್ತಿರುವ ಈ ಪ್ರದೇಶ ಸರಿಸುಮಾರು 302 ವರ್ಷಗಳ ಇತಿಹಾಸವುಳ್ಳ ಉತ್ತರ ಕನ್ನಡಗರ ಹೆಮ್ಮೆಯ ಸ್ಥಳ. ಸಂಪೂರ್ಣವಾಗಿ ನೈಸರ್ಗಿಕ ಪದ್ಧತಿಯಲ್ಲಿ ಸೂರ್ಯನ ಶಾಖವನ್ನು ಬಳಸಿ ತಯಾರಿಸಲಾಗುವ ಈ ಉಪ್ಪಿನ ತಯಾರಿಕೆಗೆ ತಗಲುವ ಸಮಯ ಸರಿಸುಮಾರು ಮೂರು ತಿಂಗಳು.  ಹೆಚ್ಚಿನ ಉಪ್ಪಿನಾಂಶವನ್ನು ಹೊಂದಿರುವ ಅಘನಾಶಿನಿ ನದ...

ಪ್ರ ಪ್ರಥಮ ಮಹಿಳಾ ವಚನಕಾರ್ತಿ..ಅಕ್ಕಮಹಾದೇವಿ.

Image
#ಅಕ್ಕಮಹಾದೇವಿ #ವಚನಕಾರ್ತಿ #ಕನ್ನಡದಪ್ರಥಮಮಹಿಳಾಕವಿಯತ್ರಿ #ಸ್ತ್ರಿವಾದಿಚಳವಳಿಯನಿಜವಾದಪ್ರತಿಪಾದಕಿ #SocialReformer #GenderEquality  ಸುಮಾರು 800 ವರ್ಷಗಳ ಹಿಂದೆಯೇ ಕರುನಾಡಿನಲ್ಲಿ "ಮಹಿಳಾ ಸಮಾನತೆ"ಯನ್ನು ಪ್ರತಿಪಾದಿಸಿದ ದಿಟ್ಟ ಶಿವಶರಣೆ ,ಮಹಾನ್ ಸಾದ್ವಿ ಅಕ್ಕಮಹಾದೇವಿ. ಶರಣರ ಕಾಲದಲ್ಲಿ ರಾಜ್ಯ ವೈಭೋಗವನ್ನು ತ್ಯಜಿಸಿ ವೈರಾಗ್ಯ ತಾಳಿದ ಮಹಾನ್ ಸಾಧ್ವಿ, ಸ್ತ್ರಿವಾದಿ ಚಳುವಳಿಯ ನಿಜವಾದ ಪ್ರತಿಪಾದಕಿ, ಶಿವಶರಣೆ ಅಕ್ಕಮಹಾದೇವಿ ಜಯಂತಿಯ ಹಾರ್ದಿಕ ಶುಭಾಶಯಗಳು.🙏🙏🌹🌹 ‐----‐------------------------------------------------------ 12ನೇ ಶತಮಾನದ ಶರಣ ಚಳುವಳಿಯ ಶ್ರೇಷ್ಠ ಶಿವಶರಣೆ, ವಚನ ಸಾಹಿತ್ಯಕ್ಕೆ ತಮ್ಮದೇ ಆದ ಅನರ್ಘ್ಯ ಕೊಡುಗೆ ನೀಡಿದ ಕನ್ನಡದ ಪ್ರಥಮ ಕವಯತ್ರಿ, "ಶಿವಶರಣೆ ಅಕ್ಕಮಹಾದೇವಿ" ಶರಣೆ ಅಕ್ಕಮಹಾದೇವಿಯವರು ಶಿವಮೊಗ್ಗ ಜಿಲ್ಲೆಯ, ಶಿಕಾರಿಪುರದ, ಶಿರಾಳಕೊಪ್ಪದ ನಡುವೆ ಇರುವ ಉಡುತಡಿ ಎಂಬ ಪುಟ್ಟ ಗ್ರಾಮದಲ್ಲಿ ನಿರ್ಮಲಶೆಟ್ಟಿ ಮತ್ತು ಸುಮತಿ ದಂಪತಿಯರ ಮಗಳಾಗಿ ಜನಿಸಿದರು. ಅಕ್ಕಮಹಾದೇವಿಯ ಉಜ್ವಲ ಲಾವಣ್ಯಕ್ಕೆ ಮೋಹಿತನಾದ ರಾಜ ಕೌಶಿಕ ಒತ್ತಾಯದಿಂದ ಅವಳನ್ನು ಅರಮನೆ ತುಂಬಿಸಿಕೊಂಡನೆಂದೂ, ತನ್ನ ಭಕ್ತಿಕಜೀವನಕ್ಕೆ ಅಡ್ಡಬರದಂತೆ ವರ್ತಿಸಬೇಕೆಂದು ಅಕ್ಕಮಹಾದೇವಿ ಶರತ್ತು ಹಾಕಿದಳೆಂದೂ, ಆ ಶರತ್ತಿಗೆ ಕೌಶಿಕ ವ್ಯತಿರಿಕ್ತವಾಗಿ ನಡೆದುಕೊಂಡ ಕಾರಣ ಅವಳು ಅರಮನೆಯನ್ನು ತೊರೆದು ಮಲ್ಲ...

Prof.K .G.Naik,founder -Principal of G.C.COLLEGE, Ankola

#APassionate Founder Principal of G.C.college, Ankola, Uttara Kannada, Prof K.G.Naik was one of the Iconic Aluminai of Ananandashram High School, Bankikoddla-Hanehalli.  ------------------------------------------------------------ Prof. K.G. Naik was the founder Principal of Gokhale Centenary College, Ankola (1966 –1990) and Secretary of Kanara Welfare Trust (1970 – 2007) started by Dr. Dinakar Desai a great educationist, who has started education revolution in Uttara Kannada District.  Prof. K.G.Naik was born in 1932, in Hanehalli. Completed his SSLC in Ananandashram High School in1950.He received his B.Sc.(Hons) in Mathematics and M.Sc. in Mathematics from Karnataka University,Dharwad. He was a merit scholar through out his studies. He started his career as Lecturer in Mathematics at Kabbur Institute of Engineering,(now called as KHK),JSS, Dharwad . Later ,Head of Department of Mathematics (HOD)at Karnatak Arts and Science College, Dharwad. He was nominated for the Vice C...

ಸ.ಪ.ಗಾಂವಕರ ...written by Sri .Shantaram Nayak

Image

ಕರುಣಾಳು ಬಾ ಬೆಳಕೆ..ಅಂಕೋಲೆಯ ಶಿಕ್ಷಣ ದಾನಿ ಸ.ಪ.ಗಾಂವಕರ 🙏🙏

Image
#ಉತ್ತರಕನ್ನಡಜಿಲ್ಲೆ #ಮಹಾನ್ ಚೇತನ #ಸ.ಪ.ಗಾವಂಕರ #ಶತಮಾನೋತ್ಸವ #ನಾಡವರಸಂಘ #ಕರ್ನಾಟಕದಬಾರ್ಡೋಲಿ  #ನಮ್ಮಹೆಮ್ಮೆ #Congratulations 🙏🙏🌹🌹🌹 ಇಂದು ಉತ್ತರ ಕನ್ನಡ ಜಿಲ್ಲೆಯ ಸಾಮಾಜಿಕ ವಾಗಿ ಹಾಗೂ ಶೈಕ್ಷಣಿಕವಾಗಿ ಮುಂದುವರೆದಿದೆ ಎಂದರೆ ಅದಕ್ಕೆ ಅನೇಕ ಮಹನೀಯರ ತ್ಯಾಗ ಹಾಗೂ ಬಲಿದಾನವೇ ಕಾರಣ. ಅಂತಹ ಮಹನೀಯರ ಪಟ್ಟಿಯಲ್ಲಿ ದಿನಕರ ದೇಸಾಯಿಯವರ ಜೊತೆಗೆ ಸರಿಸಮನಾದ ನಿಲ್ಲುವ ಹಳೆಯ ತಲೆಮಾರಿನ ಇನ್ನೊಂದು ಹೆಸರು "ಸಣ್ಣಪ್ಪ ಪರಮೇಶ್ವರ ಗಾವಂಕರ". ಅಂತಹ ಮೇರು ವ್ಯಕ್ತಿತ್ವವನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯ ಮಾಡಿಕೊಡುವದು ನಮ್ಮೆಲ್ಲರ ಕರ್ತವ್ಯವೂ ಹೌದು. ------------------------------------------------------------ ಸಣ್ಣಪ್ಪ ಪರಮೇಶ್ವರ ಗಾಂವಕರ , 11 ಜನವರಿ 1885 ರಂದು ಕುಮಟಾ ತಾಲ್ಲೂಕಿನ ಪುಟ್ಟ ಗ್ರಾಮ ತೊರ್ಕೆಯಲ್ಲಿ ಜನಿಸಿದರು. ಅವರು ಅದೇ ತಾಲ್ಲೂಕಿನ ತದಡಿಯಲ್ಲಿರುವ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ತಮ್ಮ 40 ನೇ ವಯಸ್ಸಿನಲ್ಲಿ (1925), ಗಾಂವಕರರು ಸಾಂಗ್ಲಿಯ ವಿಲ್ಲಿಂಗ್‌ಡನ್ ಕಾಲೇಜಿನಿಂದ ಬಿ. ಎ ಪದವಿಯನ್ನು ಪಡೆದರು. ಅವರು ಹುಬ್ಬಳ್ಳಿ ಪುರಸಭೆಯಲ್ಲಿ ಅಧಿಕಾರಿಯಾಗಿದ್ದರು. 1942 ರಲ್ಲಿ ತಮ್ಮ ನಿವೃತ್ತಿಯ ನಂತರ, ಸ.ಪ. ಗಾಂವಕರರು ಅವರು "ಕ್ವಿಟ್ ಇಂಡಿಯಾ ಚಳುವಳಿ "ಯಲ್ಲಿ ಭಾಗವಹಿಸಿದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ...